ಉದಯ್ ಫಿಲಂಸ್ ಲಾಂಛನದಲ್ಲಿ ಉದಯ್ ಕುಮಾರ್ ಯು.ಆರ್ ನಿರ್ಮಾಣದ ಜೋಗಿಗುಡ್ಡ ಚಿತ್ರಕ್ಕೆ ಬೇಲೂರು ಹಳೇಬೀಡು ವಿನಲ್ಲಿ ನಾಯಕಿ ನಿಖಿತಾ ನಾರಾಯಣ್ ಕಲ್ಲೆಲ್ಲಿ ಶಿಲೆಯಾಗಿವೇ, ಶಿಲೆಯಲ್ಲಿ ಕಲೆಯಾಗಿವೇ ಕರುನಾಡ ಗರ್ವವೇ ವಿಷ್ಣುವರ್ಧನನ ಸತಿ ಶಾಂತಲೇ, ನಾಟ್ಯಲೋಕ ನಾದ ಲೋಕಾ ಜಂಟಿ ಸಋಷ್ಟಿಯಾಯ್ತು ಬೇಲೂರಲ್ಲೇ...... ಎಂಬ ಗೀತೆ ಮದನ್ ಹರಿಣಿ ನೃತ್ಯನಿರ್ದೇಶನಲ್ಲಿ ನಡೆಯಿತು. ಈ ಗೀತೆಯನ್ನು ಕೆ.ಕಲ್ಯಾಣ್ ರಚಿಸಿದ್ದಾರೆ. ಟಿ. ನಾಗಚಂದ್ರ ನಿರ್ದೇಶನದ ಈ ಚಿತ್ರಕ್ಕೆ ಕೆ.ಎಂ.ವಿಷ್ಣುವರ್ಧನ್ ಛಾಯಾಗ್ರಹಣ,. ಸಂಗೀತ - ಜೆಸ್ಸಿ ಗಿಫ್ಟ್, ಕಲೆ-ಮೋಹನ್ ಬಿ ಕೆರೆ, ಸಹ ನಿರ್ದೇಶನ - ಗಂಗಾಧರ್ ಹೊನ್ನರಾಜ್, ಸಂಭಾಷಣೆ-ಚಿ,ಭಾಸ್ಕರ್, ಸಂಕಲನ-ಪಿ.ಆರ್. ಸೌಂದರ್ ರಾಜ್, ಸಾಹಿತ್ಯ- ಜಯಂತ್ ಕಾಯ್ಕಿಣಿ, ಕವಿರಾಜ್, ಕೆ. ಕಲ್ಯಾಣ್, ನೃತ್ಯ - ಇಮ್ರಾನ್ ಸರ್ದಾರಿಯಾ, ಸಾಹಸ-ರವಿವರ್ಮ, ಡಿಫೆಂಟ್ ಡ್ಯಾನಿ. ನಿರ್ವಹಣೆ-ರಾಜಾರಾವ್, ಮೇಲ್ವಿಚಾರಣೆ-ಶಿವಪ್ರಸಾದ್ ತೀರ್ಥಹಳ್ಳಿ ತಾರಾಗಣದಲ್ಲಿ - ಧರ್ಮ ಕೀರ್ತಿರಾಜ್, ನಿಖಿತಾ ನಾರಾಯಣ್, ಶರಣ್ ಕೌರ್, ಅವಿನಾಶ್, ಮಾಳವಿಕ, ರವಿಶಂಕರ್, ಶಿವಕುಮಾರ್, ಶ್ರೀರಕ್ಷ, ರಾಜು ತಾಳೀಕೋಟೆ, ಸ್ವಯಂವರ ಚಂದ್ರು, ಪೆಟ್ರೋಲ್ ಪ್ರಸನ್ನ, ಪ್ರಶಾಂತ್ ಸಿದ್ಧು (ನೀಗ್ರೋ) ರಮಾನಂದ್, ಮುಂತಾದವರಿದಾರೆ.